ಹಿಂದುತ್ವ ಸಂಘಟನೆಗಳಿಂದ ಮುಂದುವರಿದ ಅನೈತಿಕ ಪೊಲೀಸ್ ಗಿರಿ: ಮೂಲ್ಕಿಯಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ

  December 17,2022
news-banner
ಮೂಲ್ಕಿ: ದ.ಕ. ಜಿಲ್ಲೆಯಲ್ಲಿ ಹಿಂದುತ್ವ ಸಂಘಟನೆಗಳ ಅನೈತಿಕ‌ ಪೊಲೀಸ್ ಗಿರಿ ಮುಂದುವರಿದಿದ್ದು, ಅನ್ಯಕೋಮಿನ ಯುವಕನೋರ್ವನಿಗೆ ಮಾರಣಾಂತಿಕ ರೀತಿಯಲ್ಲಿ ಹಲ್ಲೆ‌ ನಡೆಸಿರುವ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಹಳೆಯಂಗಡಿ ಕೊಪ್ಪಳ ನಿವಾಸಿ ದಾವೂದ್ ಎಂದು ತಿಳಿದು ಬಂದಿದೆ.

ದಾವೂದ್ ನನ್ನು ಕೆರೆಕಾಡು ದಿವೇಶ ಎಂಬವರ ಮನೆಯ ಮುಂಭಾಗದಲ್ಲಿ ಥಳಿಸಿದ ದುಷ್ಕರ್ಮಿಗಳು ಬಳಿಕ ಕೆರೆಕಾಡು ಸ್ಮಶಾನದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧಿಸಿ ಹಲ್ಲೆಗೊಳಗಾದವರನ್ನೇ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.

ಕಳೆದ ನವೆಂಬರ್ ನಲ್ಲಿ ಇದೇ ಪ್ರದೇಶದ ಎಸ್ ಕೋಡಿ ಎಂಬಲ್ಲಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಅನ್ಯಮತೀಯ ಯುವಕನಿಗೆ ಹಲ್ಲೆ‌ ನಡೆಸಿದ್ದ ಘಟ‌ನೆ ನಡೆದಿತ್ತು.

Leave Your Comments