ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಪ್ರಕರಣ ಸಂಬಂಧ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್ (47) ಎಂದು ತಿಳಿದು ಬಂದಿದೆ.
ಮೇ 27 ರಂದು ಉಪ್ಪಳದ ಎಕ್ಸ್ಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ವ್ಯಾನ್ ನಿಂದ ಹಣ ದರೋಡೆ ಮಾಡಲಾಗಿತ್ತು.
ವಿಶೇಷ ಪೊಲೀಸ್ ತಂಡ ತಿರುಚ್ಚಿರಾಪಳ್ಳಿಯಿಂದ ಆರೋಪಿಯನ್ನು ಬಂಧಿಸಿದ್ದಾರೆ. ಮೂವರ ತಂಡ ಕೃತ್ಯ ನಡೆಸಿರುವುದಾಗಿ ತಿಲೀದು ಬಂದಿದೆ.