ಮುಲ್ಕಿ: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡ್ ಶಾಖೆ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಖೆಯ ಕಚೇರಿ ವಠಾರದಲ್ಲಿ ಗುರುವಾರ ನಡೆಸಲಾಯಿತು.
ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಶೀರ್ ಅಹ್ಮಮದ್ ಹಾಗೂ ಶಾಖೆಯ ಹಿರಿಯರಾದ ಎಂ.ಎಂ. ಬಾವ ಅವರು ಧ್ವಜಾರೋಹಣ ಗೈದರು.
ಮಸೀದಿಯ ಖತಿಬ್ ಉಸ್ತಾದರಾದ ಶರೀಫ್ ದಾರಿಮಿ ಅಲ್ ಹೈತಮಿ ಅವರು ಸ್ವಾತಂತ್ರ ಸಂಗಮದ ಕುರಿತು ಹಿತವಚನ ನೀಡಿ ದುಃಹ ನೆರೆವೇರಿಸಿದರು .
ಈ ಸಂದರ್ಭದಲ್ಲಿ ಶಾಖಾ ಅಧ್ಯಕ್ಷರಾದ ಎಂ. ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ರಾಹೀಲ್, ಶಾಯೀರ್, ಹಸನಬ್ಬ ಕೋಟೇಶ್ವರ, ಸಮಿತಿಯ ಪದಾಧಿಕಾರಿಗಳು, ಮದರಸದ ಉಸ್ತಾದರು, ಊರಿನ ಹಿರಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಖೆಯ ಜೊತೆ ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.