ಕಿನ್ನಿಗೋಳಿ: 78ನೇ ಸ್ವಾತಂತ್ರೋತ್ಸವ ಪ್ರಯುಕ್ತ ಮೊಹಮ್ಮದೀಯ ಜುಮಾ ಮಸೀದಿ ಪುನರೂರು ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಹಾಜಿ ಧ್ವಜಾರೋಹಣ ಗೈದರು. ಖತೀಬರಾದ ಮುಹಮ್ಮದ್ ಅಶ್ರಫ್ ಸಖಾಫಿ ಸ್ವಾತಂತ್ರ್ಯದ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭ ಮಸೀದಿ ಆಡಳಿತ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ರಶೀದ್ ಲತೀಫ್, ಅಫ್ತಾಬ್, ಶಬೀರ್, ರಫೀಕ್ ಫ್ಲವರ್, ಅದ್ದು ಅಂಗರಗುಡ್ಡೆ, ಸಿದ್ದೀಕ್ ಪುನರೂರು ಉಪಸ್ಥಿತರಿದ್ದರು.