ಬಜ್ಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗ ಎಕ್ಕಾರು ಅರಸು ಪದವಿನ ಕೆಂಪುಕಲ್ಲಿನ ಕೋರೆಯ ಕಾರ್ಮಿಕರೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಕಾರ್ಮಿಕ ವಿಜಯ ನಗರ ಕೊಪ್ಪಳದ ಮಂಜುನಾಥ (28) ಎಂದು ತಿಳಿದು ಬಂದಿದೆ.
ಅವರು 6 ವರ್ಷಗಳಿಂದ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದ ಆತ ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು.