ಸುರತ್ಕಲ್: ಕಾಟಿಪಳ್ಳ 3ನೇ ವಿಭಾಗ ವಿನಾಯಕ ಫ್ರೆಂಡ್ಸ್ ವತಿಯಿಂದ ಕೋಡ್ದಬ್ಬು ದೈವಸ್ಥಾನ ಬಳಿಯ ವಿನಾಯಕ ಮೈದಾನದಲ್ಲಿ 5ನೇ ವರ್ಷದ ತುಳುನಾಡ ತೆನಸ್ ಸಂಭ್ರಮ 2024 ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ., ನಮ್ಮ ಸಂಪ್ರದಾಯ ಆಚಾರ ವಿಚಾರ ಉಳಿವಿಗೆ ಹಿಂದೂ ಜೀವನಪದ್ಧತಿಯ ಉಳಿವು ಅಗತ್ಯ ಎಂದರು.
ಜಾನಪದ ವಿದ್ವಾಂಕ ಕೆ.ಕೆ.ಪೇಜಾವರ ದಿಕ್ಸೂಚಿ ಭಾಷಣ ಮಾಡಿದರು. ಇದೇ ಸಂದರ್ಭ ಸ್ಥಳೀಯ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಿತು.
ಈ ಸಂದರ್ಭ ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯ ಲೋಕೇಶ್ ಬೊಳ್ಳಾಜೆ, ಉದ್ಯಮಿ ಬಾಳದಗುತ್ತು ಸಂತೋಷ್ ಎಸ್. ಪೂಂಜಾ, ಕೃಷ್ಣಾಪುರ ಸರಳ ಧೂಮಾವತಿ ದೈವಸ್ಥಾನ ಅಧ್ಯಕ್ಷ ಶಿವ ಪ್ರಸಾದ್ ಶೆಟ್ಟಿ, ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಯಾಕರ್ ಪಿ., ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಮೂಡಾಯಿ ಕೋಡಿ, ಸುರತ್ಕಲ್ ಬಂಟರ ಸಂಘದ ನಿರ್ದೇಶಕಿ ಸವಿತಾ ಭವಾನಿ ಶಂಕರ ಶೆಟ್ಟಿ, 3ನೇ ವಿಭಾಗ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಮಹೇಶ್ ಕರ್ಕೇರ ಮತ್ತಿತರರಿದ್ದರು.